ಪ್ರಕೃತಿ ಮತ್ತು ಪುರುಷ

ಬಿಡಿಸಲಾಗದ ಬಂಧವಿದು
ಆದರೂ ಒಗಟು.
ಒಳಗೊಳಗೆ ತುಡಿತ-ಮಿಡಿತ
ತೋರಿಕೆಯ ಹಿಂದೆಗೆತ

ಭಾನು-ಭುವಿಯರ ಮಿಲನ
ಅಂಭವ ಮಧ್ಯಂತರಾಳದೊಳು
ಕ್ಷಿತಿಜದೊಳು ಭಂಗರಹಿತ
ತುಂಬು ಬಿಂದಿಗೆಯಂತೆ
ಹಬ್ಬಿ ನಿಂತಿದೆ ಪ್ರೀತಿ
ಬಿಂಬ ಪ್ರತಿಬಿಂಬವಾಗುವ ಬಯಕೆ
ಆದರೂ ಮನ ಬೆರೆತರೂ
ಬೆರೆಯದಂತೆ, ಒಲಿದರೂ
ಒಲಿಯದಂತೆ ಇರುವುದೇತಕೆ
ಪದ್ಮಪತ್ರದಂತೆ?

ಒಡಲು ತುಂಬಬೇಕು
ಆ ಉರಿ ಜ್ವಾಲೆ ಕಿರಣಗಳಿಂದಷ್ಟೇ
ಗರ್ಭ ಫಲಿತ, ಇಲ್ಲದಿರೆ
ಕೆಟ್ಟು ಸ್ಖಲಿತ, ಈಚೆ ಈ ವಧು
ತೆರೆದುಕೊಂಡರೆ ತಾನೆ
ಈ ಶಾಖ ಶಾಲೆ ಮೌಲ್ಯ ಸಹಿತ
ಇಲ್ಲದಿರೆ ವ್ಯರ್ಥ ಮೊರೆತ

ನೀ ನನಗಾರೆ ನಾ ನಿನಗೆ
ಈ ನಂಟು ಜನ್ಮ ಜನ್ಮದ ಗಂಟು
ಅರಿತು ನಡೆ ಸವಿಯುಂಟು
ಬೆಲ್ಲದ ಅಂಟು.


Previous post ಈ ಒಂದು ಕ್ಷಣದ ಹಿಂದೆ….
Next post ಮಂಡೂಕ ರಾಜ್ಯ

ಸಣ್ಣ ಕತೆ

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

cheap jordans|wholesale air max|wholesale jordans|wholesale jewelry|wholesale jerseys